ಅಗೋಳಿ ಮಂಜಣ್ಣ ತುಳುನಾಡಿನ ಅತ್ಯಂತ ಪ್ರಸಿದ್ಧ ವೀರಯೋಧರಲ್ಲಿ ಅಗೋಳಿ ಮಂಜಣ್ಣ ಒರ್ವ. ತುಳುನಾಡಿನ ಸುತ್ತಮುತ್ತಲಿನ ಜನಾಂಗದಲ್ಲಿ ಅವನ ಶೌರ್ಯ ಮತ್ತು ಬಲಾಡ್ಯತೆಯನ್ನು ಕುರಿತು ಅನೇಕ ಜನಪದ ಕತೆಗಳು ಪ್ರಸಿದ್ಧವಾಗಿವೆ. ಯಕ್ಷಗಾನ, ಪಾಡ್ದನ ಮತ್ತು ಇತರೆ ಜನಪದ ಕೃತಿಗಳಲ್ಲೂ ಅವನ ಜೀವನ ಮತ್ತು ಸಾಹಸಗಳನ್ನು ವರ್ಣಿಸಲಾಗಿದೆ. == ತುಳುನಾಡಿನ ಭೀಮ == ತುಳುನಾಡಿನ ವೀರಪುರುಷ ಎಂದೇ ಹೆಸರಾದ “ಅಗೋಳಿ ಮಂಜಣ್ಣ’ ಒಬ್ಬ ಅಸಾಧ್ಯ ಧೈರ್ಯ ಶಾಲಿ, ಬಲಶಾಲಿ, ಆತನ ಬಲ ಎಷ್ಟರಮಟ್ಟಿಗೆ ಅಂದರೆ, ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಂತಹ ಬಲಶಾಲಿ. ಮಂಗಳೂರಿನ ಮುಲ್ಕಿ ಸೀಮೆಯ ಅಧಿಪತಿ ಎನಿಸಿಕೊಂಡಿದ್ದ “ಅಗೋಳಿ ಮಂಜಣ್ಣ’. ಅಗೋಳಿ ಮಂಜಣ್ಣನ ಕಥೆ ತುಳುನಾಡಿನ ಶೂರತನ, ಬಲಶಾಲಿತ್ವ ಮತ್ತು ಸಾಹಸಗಳಿಂದ ಹೆಸರಾದ ಐತಿಹಾಸಿಕ ವ್ಯಕ್ತಿಯ ಕಥೆ. ತುಳುನಾಡಿನಲ್ಲಿ ಜನಪ್ರಿಯನಾದ ಈ ವೀರನು, ಅಸಾಧ್ಯ ಶಕ್ತಿ ಹೊಂದಿದ ಧೈರ್ಯಶಾಲಿಯಾಗಿದ್ದ. ‘ತುಳುನಾಡಿನ ಭೀಮ’ ಎಂದು ಜನಪ್ರಸಿದ್ಧಿಯಾಗಿರುವ ಮಂಜಣ್ಣನು ಒಂದೇ ಬಾರಿಗೆ ಹತ್ತು ಮೂಟೆ ಅಕ್ಕಿ ಎತ್ತಬಲ್ಲಷ್ಟು ಬಲಶಾಲಿಯಾಗಿದ್ದ. ಅವನ ಶರೀರವು ಭೀಮನು ಜನ್ಮ ತಾಳಿದಂತೆ ಗಟ್ಟಿಯಿದ್ದು, ಬಕಾಸುರನ ಬಾಯಿನಂತೆ ಬೃಹದಾಕಾರದ ಆಗಿತ್ತು. ಮಂಜಣ್ಣನ ತಿನ್ನುವ ಸಾಮರ್ಥ್ಯ ಮತ್ತು ಅವನ ದೈಹಿಕ ಬಲವೂ ಜನಮಾನುಷರಲ್ಲಿ ಅಚ್ಚರಿಯನ್ನು ಹುಟ್ಟಿಸಿದ್ದ. "ಅಗೋಳಿ" ಎಂಬ ತುಳು ಶಬ್ದವು "ಗುಡಾಣ" ಅಥವಾ "ಹಂಡೆ" ಎಂಬ ಅರ್ಥ ಹೊಂದಿದ್ದು, ಅವನ ತಿನ್ನುತ್ತಿದ್ದಂತಹ ಭಾರಿ ಪ್ರಮಾಣದ ಆಹಾರದ ಪಾತ್ರೆಯಾದ , ಅಗೋಳಿಯಿಂದ ಮಂಜಣ್ಣನ ಹೆಸರಿನೊಂದಿಗೆ ಅಂಟಿ ಹೋಗಿದೆ. ಅಗೋಳಿ ಮಂಜಣ್ಣನಿಗೆ ಅಜಾನುಬಾಹು ಶರೀರವಿತ್ತು, ಮತ್ತು ಅವನು ತನ್ನ ಬಾಹುಬಲದಿಂದ ಬಹುಸಂಖ್ಯೆಯಲ್ಲಿ ಸಾಹಸಗಳನ್ನು ಮಾಡುತ್ತಾ ಜನಮಾತೃಕನಾದನು. == ಹುಟ್ಟು == ಅಂದಾಜು 200 ವರ್ಷಗಳ ಹಿಂದೆ ಮಂಗಳೂರಿನ ಸನಿಹದ ಚೆಳ್ಯಾರು ಎಂಬ ಪ್ರದೇಶದಲ್ಲಿ ಅವನು ಬದುಕಿದನೆಂದು ಹೇಳಲಾಗುತ್ತದೆ. ಅವರ ತಂದೆ ಸುರತ್ಕಲ್ ಸಮೀಪದ ಕಟ್ಲದಲ್ಲಿ ವಾಸಿಸುತ್ತಿದ್ದರು. ಅಲ್ಲಿನ ಬರ್ಕೆ ನಾರಾಯಣ ಶೆಟ್ಟಿ ಎಂಬವರು ಚೇಳಾರು ಗುತ್ತಿನಲ್ಲಿ ಕೃಷಿಕರಾಗಿದ್ದ ಬಗ್ಗಣ್ಣ ಅಡ್ಯಂತಾಯರ ಸಹೋದರಿ ದುಗ್ಗು ಎಂಬವರನ್ನು ವರಿಸಿದ್ದರು. ಇಂದಿಗೂ ಚೇಳಾರು ಗುತ್ತಿನ ಮನೆಯಲ್ಲಿ ದುಗ್ಗು ಶೆಟ್ಟಿಗೆ ಒಂದು ಕೋಣೆ ಇದ್ದು, ಆ ಮನೆಯನ್ನು ಸಂಭ್ರಮದಿಂದ ಸ್ಮರಿಸಲಾಗುತ್ತದೆ.ಸಂತಾನ ಭಾಗ್ಯವಿಲ್ಲದ ದುಗ್ಗು ಎಂಬಾಕೆ ಬಪ್ಪನಾಡು ದೇವಿಗೆ ಹರಕೆ ಹೊತ್ತ ಕಾರಣ, ಅವನ ಜನ್ಮ ಸಂಭವಿಸಿತು. ಅವನ ಬಲ ಮತ್ತು ಶಕ್ತಿಯು ಆಗಿನ ಕಾಲದಲ್ಲಿ ಜನರಿಗೆ ಆಶ್ಚರ್ಯ ಮತ್ತು ಗೌರವವನ್ನು ಉಂಟುಮಾಡಿತ್ತು. == ಅಗೋಳಿ ಮಂಜಣ್ಣನ ಮಹಾನ್ ಸಾಹಸ == ಅಗೋಳಿ ಮಂಜಣ್ಣನ ಮಹಾನ್ ಸಾಹಸಗಳಲ್ಲಿ ಒಂದು ಎಂದರೆ, ಅವನು ಎರ್ಮಾಳಿನಿಂದ ಸುಮಾರು 9 ಕಿ.ಮೀ ದೂರದಲ್ಲಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಒಂದು ಭಾರಿ ಗಾತ್ರದ ಶಿಲೆಯನ್ನು ಹೊತ್ತು ತಂದಿದ್ದಾನೆ. ಆ ‘ದಂಬೆ ಕಲ್ಲು’ ಇಂದಿಗೂ ಆ ಸ್ಥಳದಲ್ಲಿ ಕಾಣಸಿಗುತ್ತದೆಯಾದರೂ, ಆ ಕಲ್ಲು ಸಾಮಾನ್ಯ ಶಿಲೆಯಲ್ಲ. ಆ ಕಾಲದಲ್ಲಿ ಹಾಗೊಂದು ಭಾರಿ ಕಲ್ಲನ್ನು ಒಬ್ಬನೇ ಹೊತ್ತ ತಾಕತ್ತು ಇಂದಿನ ಕ್ರೇನ್ ಮತ್ತು ಸರಕು ಸಾಗಣೆ ವಾಹನಗಳು ಮಾಡುವ ಕೆಲಸವನ್ನು ಮೀರುವಂತಿತ್ತು. ಈ ದಂಬೆ ಕಲ್ಲು, ಆತನ ಸಾಹಸ ಮತ್ತು ಶಕ್ತಿಯ ಸ್ಮಾರಕವಾಗಿ ಈಗ ಬಪ್ಪನಾಡು ದೇವಸ್ಥಾನದ ವಠಾರದ ಮೂಲೆಯಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದಿದೆ. ಈ ಐತಿಹಾಸಿಕ ಕಲ್ಲನ್ನು ಗೌರವಿಸಲು ಮತ್ತು ಅದನ್ನು ಮುನ್ನಡೆಯಲು, ಸ್ಥಳೀಯರು ಆ ಕಲ್ಲು ಇಡುವ ಪೀಠವನ್ನು ಕಟ್ಟಬೇಕು, ಕಲ್ಲು ಸುತ್ತಲು ರಕ್ಷಣಾ ಬೇಲಿಯನ್ನು ನಿರ್ಮಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.ಅಗೋಳಿ ಮಂಜಣ್ಣನ ಈ ಸಾಹಸಗಳು ಮತ್ತು ಅವನ ಜೀವನಕಥೆ ತುಳುನಾಡಿನ ಇತಿಹಾಸದಲ್ಲಿ ಅವಿಸ್ಮರಣೀಯವಾಗಿ ಉಳಿದಿದೆ, ಆದರೆ ಅವನಂತ ದೊಡ್ಡಮಟ್ಟದ ವೀರ ಪುರುಷನಿಗೆ ತಕ್ಕ ರೀತಿಯ ಸ್ಮಾರಕವಿಲ್ಲದೆ ಕಲ್ಲಿನಂತೆಯೇ ಅವನ ಕಥೆಯೂ ತೀರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. == ಅಗೋಳಿ ಮಂಜಣ್ಣನ ಮತ್ತಷ್ಟು ಸಾಹಸಗಳು == ಅಗೋಳಿ ಮಂಜಣ್ಣನು ಶಕ್ತಿಶಾಲಿಯಾಗಿದ್ದು, ಅವನನ್ನು ದೈವಾಂಶ ಸಂಭೂತ ವ್ಯಕ್ತಿ ಎಂದು ತಲೆದೋರುತ್ತಾರೆ. ತಾನು ಇಕ್ಕೇರಿ ಅರಸರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ದಕ್ಷಿಣ ಕನ್ನಡಕ್ಕೆ ಆಗಾಗ ದಾಳಿ ಮಾಡುತ್ತಿದ್ದ ಕೇರಳದ ಕೋಲತ್ತೀರಿ ಅರಸರನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದನು. ಸಾವಂತರರು, ಇಕ್ಕೇರಿ ಅರಸರ ಸೈನ್ಯದ ಮುಖ್ಯಸ್ಥನನ್ನಾಗಿ ಅವನನ್ನು ನೇಮಕಮಾಡಿದರು. ಅಗೋಳಿ ಮಂಜಣ್ಣನು ತನ್ನ ಬಲಶಾಲಿತ್ವ ಮತ್ತು ಉತ್ತಮ ನಾಯಕತ್ವದ ಮೂಲಕ ಕೋಲತ್ತೀರಿ ಅರಸರ ವಿರುದ್ಧ ಜಯ ಸಾಧಿಸಿದನು. ಅವನ ಈ ಸಾಹಸವು ಅವನನ್ನು ಜನಪ್ರೀಯ ಮತ್ತು ವೀರನನ್ನಾಗಿ ಮಾಡಿದ ಕಾರಣ, ಅವನ ಕಥೆಗಳು ಕಾದಂಬರಿ, ಕವಿತೆ, ಪಾಡ್ದನಗಳಲ್ಲಿ ನಿರಂತರವಾಗಿ ಉಳಿದಿವೆ. ಆದರೂ, ಅವನ ಬಗ್ಗೆ ಹೆಚ್ಚು ದಾಖಲೆಗಳು ಲಭ್ಯವಿಲ್ಲ, ಅವನ ವೈವಾಹಿಕ ಜೀವನ ಮತ್ತು ಇತಿಹಾಸದ ಇತರ ಅಂಶಗಳ ಕುರಿತು ಸ್ಪಷ್ಟತೆಯಿಲ್ಲ. ಅಗೋಳಿ ಮಂಜಣ್ಣನ ವೈಯಕ್ತಿಕ ಜೀವನ, ಅವನ ಕಾಲಘಟ್ಟ, ಮತ್ತು ವೈವಾಹಿಕ ಸ್ಥಿತಿಯ ಕುರಿತು ಗೊಂದಲಗಳಿದ್ದರೂ, ಈತನ ಕುರಿತಾದ ಕತೆಗಳು ತುಳುನಾಡಿನಲ್ಲಿ ಜನಪದ ಕಥೆಗಳಾಗಿ ಜೀವಂತವಾಗಿವೆ. ಅವನ ಕುರಿತು ಸಮಗ್ರವಾದ ಅಧ್ಯಯನಗಳು ಇನ್ನೂ ಅಲಭ್ಯವಾಗಿದ್ದು, ಆಧುನಿಕ ಇತಿಹಾಸಕಾರರು ಮತ್ತು ವಿಜ್ಞಾನಿಗಳು ಈತನ ಕುರಿತಾದ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. == ಮುಲ್ಕಿದ ಅರಸು ಕಂಬಳ ಮತ್ತು ಮಂಜಣ್ಣೆ == ಸುಮಾರು 350-400 ವರ್ಷಗಳ ಹಿಂದೆ ಮೂಲ್ಕಿ ಭಾಗದ ದುಗ್ಗಣ್ಣ ಸಾವಂತರ ಕಾಲದಲ್ಲಿ ಆಗೋಳಿ ಮಂಜಣ್ಣನವರು ಸಾವಂತರ ಸೂಚನೆಯಂತೆ ಪಣಂಬೂರು ಕಂಬಳದ ಮಣ್ಣನ್ನು ತನ್ನ ಕೌಪೀನದಲ್ಲಿ ಹೊತ್ತು ತಂದು ಪಡುಪಣಂಬೂರಿನಲ್ಲಿ ಅರಸು ಕಂಬಳ ಆರಂಭಿಸಿದ್ದರು ಅನ್ನುವ ಇತಿಹಾಸ ಇದೆ. == ಉಲ್ಲೇಖಗಳು == [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ